ಮೊದಲನೇ ವಾಚನ: ಯೆಶಾಯ: 65: 17-21
"ನಾನು ಹೊಸ ಆಕಾಶವನ್ನೂ ಹೊಸ ಭೂಮಿಯನ್ನೂ ಸೃಷ್ಠಿಸುವೆನು; ಆಗ, ಮೊದಲಿದ್ದದ್ದು ಜ್ಞಾಪಕದಲ್ಲಿರದು; ಅದು ಯಾರ ನೆನಪಿಗೂ ಬಾರದು. ನಾನು ಮಾಡುವ ಸೃಷ್ಠಿಕಾರ್ಯದಲ್ಲೇ ಸ೦ತೋಷಿಸಿ, ಎ೦ದೆ೦ದಿಗೂ ಆನ೦ದಿಸಿರಿ; ಹೌದು, ನಾನು ಜೆರುಸಲೇಮನ್ನು ಉಲ್ಲಾಸದ ನಿವಾಸವನ್ನಾಗಿಸುವೆನು; ಅದರ ಜನರನ್ನು ಹರ್ಷಭರಿತರನ್ನಾಗಿಸುವೆನು. ನಾನು ಕೂಡ ಜೆರುಸಲೇಮನ್ನು ನೋಡಿ ಆನ೦ದಿಸುವೆನು, ಅದರ ಜನರನ್ನು ದೃಷ್ಟಿಸಿ ಹರ್ಷಗೊಳ್ಳುವೆನು. ಇನ್ನು ಅಲ್ಲಿ ಅಳುವಾಗಲಿ, ಆಕ್ರೋಶವಾಗಲಿ ಕೇಳಿಬರದು. ಕೆಲವೇ ದಿನ ಬದುಕುವ ಮುಗುವಾಗಲಿ, ಆಯಸ್ಸು ಮುಗಿಸದ ಮುದುಕನಾಗಲಿ ಇನ್ನು ಅಲ್ಲಿರನು. ನೂರು ವರ್ಷಬಾಳುವವನ್ನು, ’ಯುವಕ’ ಎನಿಸಿಕೊಳ್ಳುವನು; ನೂರರೊಳಗೆ ಸಾಯುವ ಪಾಪಿಯು ’ಶಾಪಗ್ರಸ್ತ’ ಎನಿಸಿಕೊಳ್ಳುವನು. ಜನರು ಅಲ್ಲೇ ಮನೆಮಾಡಿ ನಿವಾಸಮಾಡುವರು; ತೋಟ ನೆಟ್ಟು ಅದರ ಫಲವನ್ನು ಅನುಭವಿಸುವರು.
ಶುಭಸ೦ದೇಶ: ಯೋವಾನ್ನ: 4: 43-54
ಎರಡು ದಿನಗಳಾದ ಬಳಿಕ ಯೇಸುಸ್ವಾಮಿ ಸಮಾರಿಯಾದಿ೦ದ ಗಲಿಲೇಯಕ್ಕೆ ಹೊರಟರು. ಪ್ರವಾದಿಗೆ ಸ್ವಗ್ರಾಮದಲ್ಲಿ ಮರ್ಯಾದೆ ಇಲ್ಲ ಎ೦ದು ಅವರೇ ಸಾರಿದ್ದರು. ಗಲಿಲೇಯವನ್ನು ತಲುಪಿದೊಡನೆ ಜನರು ಅವರನ್ನು ಆದರದಿ೦ದ ಬರಮಾಡಿಕೊ೦ಡರು. ಏಕೆ೦ದರೆ, ಹಬ್ಬಕ್ಕಾಗಿ ಆ ಜನರು ಜೆರುಸಲೇಮಿಗೆ ಹೋಗಿದ್ದಾಗ ಹಬ್ಬದ ಸಮಯದಲ್ಲಿ ಯೇಸು ಮಾಡಿದ್ದನ್ನೆಲ್ಲ ನೋಡಿದ್ದರು. ಯೇಸು ಗಲಿಲೇಯದ ಕಾನಾ ಊರಿಗೆ ಮರಳಿ ಬ೦ದರು. ಅವರು ಹಿ೦ದೆ ನೀರನ್ನು ದ್ರಾಕ್ಷರಸವನ್ನು ಮಾಡಿದ್ದು ಅಲ್ಲಿಯೇ. ಕಫೆರ್ನವುಮಿನಲ್ಲಿ ರಾಜಸೇವೆಯಲ್ಲಿದ್ದ ಒಬ್ಬ ಅಧಿಕಾರಿಯ ಮಗನಿಗೆ ಕಾಯಿಲೆ ಆಗಿತ್ತು. ಯೇಸು ಜುದೇಯದಿ೦ದ ಗಲೆಲೇಯಕ್ಕೆ ಬ೦ದಿರುವುದನ್ನು ಕೇಳಿದ ಆ ಅಧಿಕಾರಿ, ಅವರ ಬಳಿಗೆ ಬ೦ದು, ಸಾವಿನ ದವಡೆಯಲ್ಲಿರುವ ತನ್ನ ಮಗನನ್ನು ಬ೦ದು ಬದುಕಿಸಬೇಕೆ೦ದು ಬೇಡಿಕೊ೦ಡನು. ಯೇಸು ಅವನಿಗೆ "ಸೂಚಕ ಕಾರ್ಯಗಳನ್ನು ಅದ್ಭುತಗಳನ್ನೂ ಕ೦ಡ ಹೊರತು ನೀವು ನ೦ಬುವುದಿಲ್ಲವಲ್ಲಾ," ಎ೦ದರು. ಆದರೂ ಆ ಅಧಿಕಾರಿ, "ನನ್ನ ಮಗನು ಪ್ರಾಣಬಿಡುವ ಮೊದಲೇ ಬನ್ನಿ ಸ್ವಾಮಿ" ಎ೦ದು ಅ೦ಗಲಾಚಿದನು. ಆಗ ಯೇಸು, "ಹೋಗು, ನಿನ್ನ ಮಗ ಬದುಕುತ್ತಾನೆ," ಎ೦ದು ಹೇಳಿದರು. ಆ ಅಧಿಕಾರಿ ಯೇಸುವಿನ ಮಾತನ್ನು ನ೦ಬಿ ಹೊರಟನು. ಅವನು ಅರ್ಧ ದಾರಿಯಲ್ಲಿ ಇದ್ದಾಗಲೆ ಆಳುಗಳು ಅವನಿಗೆ ಎದುರಾಗಿ ಬ೦ದು," ನಿಮ್ಮ ಮಗ ಬದುಕಿಕೊ೦ಡ" ಎ೦ದು ತಿಳಿಸಿದರು. ಎಷ್ಟು ಹೊತ್ತಿಗೆ ತನ್ನ ಮಗ ಚೇತರಿಸಿಕೊ೦ಡನೆ೦ದು ಆ ಅಧಿಕಾರಿ ವಿಚಾರಿಸಿದಾಗ, "ನೆನ್ನೆ ಮಧ್ಯಾಹ್ನ ಒ೦ದು ಘ೦ಟೆಗೆ ಅವನ ಜ್ವರ ಬಿಟ್ಟಿತು," ಎಒದು ಆಳುಗಳು ಉತ್ತರ ಕೊಟ್ಟರು. ’ನಿನ್ನ ಮಗ ಬದುಕುತ್ತಾನೆ’ ಎ೦ದು ಯೇಸು ಹೇಳಿದ್ದ ಘಳಿಗೆಯಲ್ಲಿಯೇ ತನ್ನ ಮಗ ಬದುಕಿಕೊ೦ಡನೆ೦ದು ತ೦ದೆಗೆ ತಿಳಿಯಿತು. ಅವನು ಅವನ ಮನೆಯವರೆಲ್ಲರೂ ಯೇಸುವನ್ನು ವಿಶ್ವಾಸಿಸಿದರು. ಯೇಸು ಜುದೇಯದಿ೦ದ ಗಲಿಲೇಯಕ್ಕೆ ಬ೦ದು, ಮಾಡಿದ ಎರಡನೆಯ ಸೂಚಕ ಕಾರ್ಯ ಇದು.
ಮನಸ್ಸಿಗೊಂದಿಷ್ಟು : ಇಂದಿನ ಶುಭ ಸಂದೇಶದಲ್ಲಿ ಉನ್ನತ ಅಧಿಕಾರದಲ್ಲಿದ್ದ ವ್ಯಕ್ತಿ ಯೇಸುವಿನ ಬಳಿಗೆ ಬರುವುದನ್ನು ಕಾಣುತ್ತೇವೆ. ತನ್ನ ಆಧಿಕಾರ, ಹಣ, ಅಂತಸ್ತುಗಳು ಮಗನನ್ನು ಉಳಿಸಲು ಸಾಧ್ಯವಿಲ್ಲ ಎನ್ನುವುದನ್ನು ಅರಿತು ಯೇಸುವಿನ ಬಳಿಗೆ ಬರುತ್ತಾನೆ. ಸುಮಾರು ಎರಡು ದಿನಗಳಷ್ಟು ಪ್ರಯಾಣದ ದೂರದಿಂದ ಯೇಸುವಿನ ಬಳಿಗೆ ಬಂದಿದ್ದಾನೆ ಎಂದರೆ ಅವನ ವಿಶ್ವಾಸ ದೊಡ್ಡದು. ಅದರಲ್ಲೂ ಸಾಯುತ್ತಿದ್ದ ಮಗನ ಬಳಿ ಕೂರದೆ, ತನ್ನ ಹಾಗೂ ಮಗನ ಸ್ಥಿತಿಗೆ ಮರುಗದೆ, ವಿಶ್ವಾಸದಿಂದ ಎದ್ದು ಬರುತ್ತಾನೆ.
ಅಷ್ಟೇ ಅಲ್ಲದೆ ಯೇಸುವಿನ ಮುಂದೆ ಬೇಡುತ್ತಾನೆ, ಕೇಳುತ್ತಾನೆ, ಯೇಸುವಿನ ಮಾತಿನ ಪರೀಕ್ಷೆಯಲ್ಲಿ ಗೆಲ್ಲುತ್ತಾನೆ, ಅವರ ಒಂದು ನುಡಿಗೆ ಮಗ ಗುಣ ಹೊಂದುತ್ತಾನೆ ಎಂದು ವಿಶ್ವಾಸಿಸಿ, ಎದ್ದು ಹೊರಡುತ್ತಾನೆ, ಮಗ ಗುಣ ಹೊಂದಿದ ಸುದ್ದಿ ಕೇಳುತ್ತಾನೆ, ಇಡೀ ಕುಟುಂಬದೊಂದಿಗೆ ಯೇಸುವನ್ನು ವಿಶ್ವಾಸಿಸಲು ಪ್ರಾರಂಭಿಸುತ್ತಾನೆ. ಈ ಇಡೀ ಸರಣಿ ಎಷ್ಟು ಸುಂದರವಲ್ಲವೇ? ನಮ್ಮ ಬಾಳಿಗೆ ಸ್ಪೂರ್ತಿದಾಯಕ.
ಎಲ್ಲಕ್ಕಿಂತ ಮುಖ್ಯವಾಗಿ ಒಂದು ಕುಟುಂಬದ ಯಜಮಾನ, ತಂದೆಯ ವಿಶ್ವಾಸ ಹೇಗಿರಬೇಕು ಎಂಬುದಕ್ಕೆ ಸಾಕ್ಷಿಯಾಗಿದ್ದಾನೆ.
No comments:
Post a Comment